ಆಧುನಿಕತೆ

ನನ್ನಪ್ಪ ದುಡಿಮೆಗಾರ
ಹೆಣಗಾಡಿ ಕೊಂಡ ಗದ್ದೆಗಳ
ಮತ್ತೆ ಹದಮಾಡಿ ಹಸನುಗೈದ
ಅಸಲಿಗೆ ಈಗ ಅಲ್ಲಿ
ಗದ್ದೆಗಳೇ ಇಲ್ಲ
ಬದಲಿಗೆ ತೋಟಗಳು ತಲೆ ಎತ್ತಿದೆ
ತೆಂಗು ಕಂಗು ವಾಣಿಜ್ಯ ಬೆಳೆಗಳು

ನನ್ನಣ್ಣನ ಜೊತೆಗೂಡಿ
ಎತ್ತರ ಜಿಗಿವಾಡುತ್ತಿದ್ದ
ಗದ್ದೆ ಹಾಳಿಗಳು
ಈಗ ಮಂಗಮಾಯ
ಗಿಡಗಳಿಗೆ ಬುಡಗಳಾಗಿ
ಅಪ್ಪ ಗದ್ದೆಯ ಬದುವಿಗೆ
ಅಂದು ಕಟ್ಟಿಸಿದ ಕಲ್ಲು ಮಣ್ಣಿನ
ಪಾಗಾರು ಇಂದಿಲ್ಲ – ಅಲ್ಲಿ
ಕಾಂಕ್ರೀಟು ಕಂಪೌಂಡು
ರೆಡಿಯಾಗಿದೆ

ನೀರು ಹಾಯಿಸಲು
ತೋಡಿದ ಬೆಲಗುಗಳು
ಅದೃಶ್ಯ-ಪರ್ಯಾಯಕ್ಕೆ
ಪ್ಲಾಸ್ಟಿಕ್ಕು ಪೈಪುಗಳು
ಮಣ್ಣಲ್ಲಿಯೇ ಅಡಗಿ
ಗಿಡಗಳಿಗೆ ಡ್ರಿಪ್ ಇರಿಗೇಷನ್‌ಸ್ಪ್ರಿಂಕಲರು

ನಮ್ಮ ಮನೆಯ ಕೊಟ್ಟಿಗೆಯಲ್ಲಿ
‘ಅಂಬಾ’ ದನಿ ನಿನದಿಸುತ್ತಿಲ್ಲ
ಮನೆ ಹಾಲ ರುಚಿ ಹೋಗಿ
ಬದಲಿಗೆ ಕಲಬೆರಕೆಯ
ಹಾಲಿನ ಪಾಕೀಟು
ಮನೆಬಾಗಿಲಿಗೆ ಬೆಳ್ಳಂಬೆಳಗ್ಗೆ

ನನ್ನಮ್ಮ ಎರಡು ರಟ್ಟೆ
ಬಳಸಿ ಮಸಾಲೆ ಅರೆಯುತ್ತಿದ್ದ
ರುಬ್ಬು ಕಲ್ಲು ಈಗಿಲ್ಲ
ಆ ಜಾಗದಲ್ಲಿ ರಾರಾಜಿಸುತ್ತಿದೆ
ಮಿಕ್ಸರು, ಗ್ರ್‍ಯಾಂಡರು

ನಮ್ಮ ಮನೆಯಲ್ಲೀಗ ವರ್ಷಾ ಒಂದಾವರ್ತಿ
ಮನೆ ಮುಂದಿನಂಗಳ ಹಸನು ಮಾಡಬೇಕಿಲ್ಲ
ಅದಕ್ಕೆ ಅಮ್ಮನ ಒರೆಗ ಕಲ್ಲುಗಳು
ಅಟ್ಟಕ್ಕೇರಿದೆ ಬಾಳಿಲ್ಲದೆ
ಹೊರತಿಗೆ, ಸಿಮೆಂಟು ನೆಲ
ಸಿರಿವಂತಿಗೆ ಸಾರುತ್ತಿದೆ

ಅಮ್ಮ ಅಂದು ಸೌದೆ ಅಟ್ಟಿ
ಅಡುಗೆ ಬೇಯಿಸುತ್ತಿದ್ದ ಮಣ್ಣಿನ
ಒಲೆಗಳು ಈಗಿಲ್ಲ
ಆ ಜಾಗದಲ್ಲಿ ಕಲ್ಲಿನ ಕಟ್ಟೆ
ಎದ್ದು ಗ್ಯಾಸ ಒಲೆ
ಸ್ಥಾಪನೆಯಾಗಿದೆ

ನಮ್ಮ ಮನೆಯಲ್ಲೀಗ
ಆಡಂಬರವಿದೆ, ಆದರೆ
ಹಿಂದಿನ ಆನಂದವಿಲ್ಲ
ಒಡಹುಟ್ಟಿದವರ ಸಂಬಂಧವಿದೆ
ಹಿಂದಿನ ಅನುಬಂಧವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತನು ತುಂಬಿ ಮನ ತುಂಬಿ
Next post ಅಪ್ಪುವಿನ ರೈಲು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys